ಪೋಸ್ಟ್‌ಗಳು

ಆಗಸ್ಟ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ಕೇಂದ್ರ ಪುರಸ್ಕೃತ ಯೋಜನೆಗಳು ಜನತೆಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಹಿರಿದು:  ಯಾದಗಿರಿ ಟೈಮ್ಸ್ ವಾರ್ತೆ 29-08-2025 ಯಾದಗಿರಿ: ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಹಳ್ಳಿ ಹಳ್ಳಿಗೆ ಮುಟ್ಟಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ ಹಮ್ಮಿಕೊಂಡಿರುವ ವಾರ್ತಾಲಾಪ ಕಾರ್ಯಾಗಾರವು ಬಹಳ ಅನುಕೂಲಕರವಾಗಲಿದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚು ಪ್ರಚುರಪಡಿಸುವುದರಿಂದ ಎಲ್ಲ ಫಲಾನುಭವಿಗಳಿಗೂ ಸರ್ಕಾರದ ಯೋಜನೆಗಳು ತಲುಪಲಿವೆ ಎಂದು ಶಾಸಕರಾದ ಚನ್ನಾರೆಡ್ಡಿ ಅಭಿಪ್ರಾಯಪಟ್ಟರು. ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು ಹಾಗೂ ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ)., ಕರ್ನಾಟಕ ಕಾರ್ಯನಿರತ ಪತ್ರಿಕೆಗಳ ಸಂಪಾದಕರ ಸಂಘ (ರಿ). ಜಿಲ್ಲಾ ಘಟಕ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಎಸ್ ಡಿ ಎನ್ ಹೋಟೆಲ್ ನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ “ವಾರ್ತಾಲಾಪ” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಪತ್ರಕರ್ತರಿಗೆ ಈ ಕಾರ್ಯಾಗಾರ ಆಯೋಜಿಸಿರುವುದು ಬಹಳ ಸಂತೋಷದ ಸಂಗತಿ. ಇದರಿಂದ ಸರ್ಕಾರದ ಜನಪರ ಯೋಜನೆಗಳಿಗೆ ಹೆಚ್ಚಿನ ಮಾಹಿತಿ ಜನತೆಗೆ ಸಿಕ್ಕು ಅನುಕೂಲವಾಗಲಿದೆ ಎಂದರು. ಭಾರತ ಸರ್ಕಾರದ ವಾರ್ತಾ ಶಾಖೆಯ, ಬ...
ಇಮೇಜ್
ದೇವದುರ್ಗದ ಐಬಿಗೆ ಯಾಕೆ ಹೋಗಿದ್ದರು?;‘ಮಾನನಷ್ಟ ಮೊಕದ್ದಮೆ ಹೂಡುವೆ’  ಕಟಕಟಿ ಒಬ್ಬ ಇಂಗು ತಿಂದ ಮಂಗ; ಗುಡುಗಿದ ಬೋರಬಂಡಾ ತಿರುಗೇಟು ಯಾದಗಿರಿ: ಗುರಮಠಕಲ್ ಕ್ಷೇತ್ರದ ಅಭಿವೃದ್ಧಿ ಪರ ಸದನದಲ್ಲಿ ಶಾಸಕರು ಮಾತನಾಡಲಿ ಎಂದು ಸಲಹೆ ನೀಡಿದರೆ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಇಂಗು ತಿಂದ ಮಂಗನAತಾಗಿ ಮಾತನಾಡುತ್ತಿದ್ದಾರೆ ಎಂದು  ಕಾಂಗ್ರೆಸ್ ನಾಯಕ ಸಾಯಿಬಣ್ಣಾ ಬೋರಬಂಡಾ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜಕೀಯ ಮಾಡುವವರು ಪಕ್ಷಾಂತರ ಮಾಡುವುದು ಸಾಮಾನ್ಯ. ಆದರೆ ಶರಣಗೌಡ ಈ ಹಿಂದೆ ದೇವದುರ್ಗದ ಐಬಿಗೆ ರಾತ್ರಿ 2 ಗಂಟೆಗೆ ತೆರಳಿ, ಆಡಿಯೋ ರಿಲೀಸ್ ಮಾಡಿದ್ದು ಯಾವ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚರ್ಚಿಸಲು? ಉತ್ತರ ಕರ್ನಾಟಕವೇ, ಕಲ್ಯಾಣ ಕರ್ನಾಟಕವೇ ಅಥವಾ ಗುರಮಠಕಲ್ ಕ್ಷೇತ್ರದ ಬಗ್ಗೆಯೇ ಇದಕ್ಕೆ ಕಟಕಟಿ ಮೊದಲು ಉತ್ತರ ಕೊಡಲಿ ಎಂದಿದ್ದಾರೆ. ಕAದಕೂರ  ಜಾತಿ, ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ.  ಬೋರಬಂಡಾ  ಸೋಲ್ಡ್ ಔಟ್ ಎಂದು ಹೇಳಿರುವ ಕಟಕಟಿ ಅವರೆ,  ಹಿಂದೆ ತಾವು ಜಿಪಂ ಸದಸ್ಯರಾಗಿ ಕಾಂಗ್ರೆಸ್ ಗೆ ಬೆಂಬಲ ನೀಡಿದ ಕ್ಷಣದಿಂದಲೇ ನಿಮ್ಮ ನಾಯಕರ ರಾಜಕೀಯ ಜೀವನ ಆರಂಭಗೊAಡ  ಬಗ್ಗೆ ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದು ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ ಎಂದಿದ್ದಾರೆ. ನಾನು  ಸತತ ಮೂರು ದಶ...
ಇಮೇಜ್
ಶ್ರಾವಣ ಮಾಸದ ಪುರಾಣ ಪ್ರವಚನಗಳು ಯುಗ ಯುಗಗಳಿಂದಲೂ ದಾರಿದೀಪವಾಗಿ ಕೆಲಸ ಮಾಡುತ್ತಿವೆ: ವೇಣುಗೋಪಾಲ ಅಭಿಮತ ಯಾದಗಿರಿ: ಶ್ರಾವಣ ಮಾಸದ ಪುರಾಣ, ಪ್ರವಚನ ಪುಣ್ಯಕಥಾ ಮಾಲಿಕೆಗಳು ಇಡಿ ಮಾನವ ಜನಾಂಗಕ್ಕೆ ದಾರಿದೀಪಗಳಾಗಿ ಮಾರ್ಗದರ್ಶನ ಮಾಡುತ್ತಾ ಬಂದಿರುವುದು ಯುಗಯುಗಗಳಿಂದ ನಡೆದುಕೊಂಡು ಬಂದಿದೆ ಎಂದು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಚಾಲಕರಾದ ಶ್ರೀ ವೇಣುಗೋಪಾಲಜಿ ಅಭಿಪ್ರಾಯಪಟ್ಟರು.  ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯ ಶ್ರೀ ಆಂಜಿನೇಯ ದೇವಸ್ಥಾನ ಆವರಣದಲ್ಲಿ ಶ್ರಾವಣ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ 1 ತಿಂಗಳ ಪ್ರವಚನ ಹಾಗೂ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.  ಮಾನವ ಜನಾಂಗಕ್ಕೆ ಜಗದಾದ್ಯಂತ ಶ್ರಾವಣ ಮಾಸದ ವಿವಿಧ ಉಪನ್ಯಾಸ ಕಾರ್ಯಕ್ರಮಗಳು ಪುರಾಣ ಪ್ರವಚನಗಳು ಮಾರ್ಗದರ್ಶನ ಮಡುತ್ತಲೇ ಬಂದಿವೆ. ಸಮಸ್ತ ಮಾನವರಿಗೆ ಶ್ರಾವಣ ಮಾಸ ಪವಿತ್ರವಾಗಿದೆ ಎಂಬುದು ಇದೇ ಕಾರಣಕ್ಕೆ ಎಂದ ಅವರು, ಇಂತಹ ಪುಣ್ಯಶ್ರವಣ ಮಾಡಲಿ ಎಂಬ ಕಾರಣಕ್ಕೆ ನಮ್ಮ ಹಿರಿಯರು ಶ್ರಾವಣ ಮಾಸ ಎಂದರೆ ಅದು ಶ್ರವಣ ಮಾಸ ಇಂತಹ ಪುರಾಣ ಪುಣ್ಯಕಥೆ, ಪ್ರವಚನಗಳು ಕೇಳಲು ಮಾಡಿದ ಧಾರ್ಮಿಕ ವ್ಯವಸ್ಥೆಯಾಗಿದೆ ಎಂದರು.  ಈ ಹಿನ್ನೆಲೆಯಲ್ಲಿ ಆಂಜಿನೇಯ ದೇವಸ್ಥಾನದಲ್ಲಿ ಶ್ರಾವಣ ಮಾಸಪ್ರಯುಕ್ತ ಪ್ರವಚನ ಆಯೋಜನೆ ಮಾಡಿರುವುದು ಪರಂಪರೆಯನ್ನು ಮುಂದುವರೆಸಿಕೊAಡು ಹೋಗುವ ಪ್ರತೀಕವಾಗಿದೆ ಎಂದು ಹೇಳಿದ ಅವರು ಒಂದು ತಿಂಗಳಿನಿAದ ಶ್ರೀ ಮದ್ ವಾಲ್ಮೀಕಿ ...
 ಸಿಎಂ ಸ್ಥಾನ ಸಿಗುತ್ತೆಂದರೆ ನಾನು ಚನ್ನಾರಡ್ಡಿ ಇಬ್ಬರು ಆರ್ ಆರ್ ಎಸ್ ಗೀತೆ  ಹಾಡುತ್ತೆವೆ: ಸಚಿವ ಜಾರಕಿಹೊಳಿ ಪರೋಕ್ಷ ಟಾಂಗ್ ಯಾದಗಿರಿ : ಆರ್ ಎಸ್ ಎಸ್ ಗೀತೆ ಹಾಡಿದರೇ ಮುಖ್ಯಮಂತ್ರಿ ಸ್ಥಾನ ಸಿಗುವಂತಿದ್ದರೇ ನಾನು ಶಾಸಕ ಚನ್ನಾರಡ್ಡಿ ಪಾಟೀಲ್ ಇಬ್ಬರು ಹಾಡುತ್ತೆವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಎಂದಿನ ತಮ್ಮ ಸಹಜ ಶೈಲಿಯಲ್ಲಿ ಕೂಲಾಗಿಯೇ ಟಾಂಗ್ ನೀಡುವ ಗತ್ತಿನಲ್ಲಿ ಪ್ರತಿಕ್ರಿಯಿಸಿದರು.  ಇಲ್ಲಿನ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆರ್.ಎಸ್.ಎಸ್. ಗೀತೆ ಹಾಡುತ್ತಿದ್ದಾರೆ. ಸಂತೋಷ ಪರ ಬ್ಯಾಟ್ ಮಾಡುತ್ತಿದ್ದಾರೆ ಎಂದು ಗಮನ ಸೆಳೆದಾಗ ಡಿಕೆ ಅವರು ಸಂಸ್ಕ್ರತ ಭಾಷೆ ಚನ್ನಾಗಿ ಬಲ್ಲವರಾಗಿದ್ದಾರೆ. ಸಂಧರ್ಭಕ್ಕೆ ಅನುಸಾರವಾಗಿ ಅಧಿವೇಶನದಲ್ಲಿ ಹಾಡಿದ್ದಾರೆ ಅಷ್ಠೆ, ಮಾತಾಡಿದರು ಹಾಡುಹಾಡಿದರು ಎಂದ ಮಾತ್ರಕ್ಕೆ ಪರ ಇಲ್ಲವೇ ವಿರೋಧ ಮಾಡಿದ ಮಾತ್ರಕ್ಕೆ ದ್ವೇಶ ಮಾಡುತ್ತಾರೆ ಎಂದು ಭಾವಿಸುವುದು ಬಾಲಿಷತನೆಂಬರ್ಥದಲ್ಲಿ ಜಾರಕಿಹೊಳಿ ಪ್ರತಿಕ್ರಿಯಿಸಿದರು.  ಬಿಜೆಪಿ ನಾಯಕ ಬಿ.ಎಲ್. ಸಂತೋಷ ಅವರನ್ನು ಟೀಕಿಸಿದ ಮಹೇಶ ತಿಮುರುಡಿ ಅವರನ್ನು ಒದ್ದು ಒಳಗೆ ಹಾಕಿದ್ದವೆ ಎಂಬ ಮಾತು ಕೂಡಾ ದೂರು ಬಂದ ಹಿನ್ನಲೆಯಲ್ಲಿ ಹೇಳಿದ್ದಾಗಿದೆ. ಈ ಎರಡನ್ನು ಬೇರೆ ರೀತಿಯಲ್ಲಿ ಹೊಲಿಕೆ ಮಾಡುವುದು ಸರಿಯಲ್ಲ ಎಂದರು.  ಮುಂದಿನ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕ್ರಾಂತಿ...
 ಅ.1ರಂದು ಯಾದಗಿರಿಯಲ್ಲಿ ಕೋಲಿ ಸಮಾಜದಿಂದ ಬೃಹತ್ ಪ್ರತಿಭಟನೆ  ----  ಯಾದಗಿರಿ: ಕಳೆದ ಆ.13 ರಂದು ನಗರದಲ್ಲಿ ವಾಲ್ಮೀಕಿ ನಾಯಕ ಸಮಾಜದಿಂದ ನಡೆದ ಪ್ರತಿಭಟನೆ ವೇಳೆ ಕೋಲಿ ಸಮಾಜದ ಗುರುಗಳನ್ನು ಮತ್ತು ಸಮಾಜದ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದವರನ್ನು ಕೂಡಲೇ ಬಂಧಿಸಬೇಕೆಂಬ ಬೇಡಿಕೆ ಸೇರಿದಂತೆಯೇ ಮೂರು ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿ ಅ.1 ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕರ‍್ಜನ ಗೋಸಿ ಹೇಳಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರ‍್ಕಾರದ ಆದೇಶದಂತೆಯೇ ತಳವಾರ ಸಮುದಾಯದವರಿಗೆ  ಎಸ್ ಟಿ ಜಾತಿ ಪ್ರಮಾಣಪತ್ರ ( ರ‍್ಟೀಫಿಕೆಟ್) ನೀಡಬೇಕು ಮತ್ತು ಕೋಲಿ,ಕಬ್ಬಲಿಗ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸಬೇಕೆಂದು ಅಂದು ಹೋರಾಟ ನಡೆಯಲಿದೆ. ಅಂದಿನ ಹೋರಾಟಕ್ಕೆ ಜಿಲ್ಲೆ ಸೇರಿದಂತೆಯೇ ವಿವಿಧಡೆಯಿಂದ ಸುಮಾರು 15 ಸಾವಿರ ಜನರು ಭಾಗವಹಿಸಿ ಸಮಾಜದ ಶಕ್ತಿ ಪ್ರರ‍್ಶಿಸಿ ರ‍್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದರು. ಕೋಲಿ ಸಮಾಜದ ನಾವ್ಯಾರು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿಲ್ಲ. ರ‍್ಕಾರದ ಆದೇಶದಂತೆಯೇ ತಳವಾರರು ಇದನ್ನು ಪಡೆಯುತ್ತಿದ್ದು, ಇದು ಹೇಗೆ ನಕಲಿ ಆಗುತ್ತದೆ ಎಂದು ಗೋಸಿ ಪ್ರಶ್ನಿಸಿದರು. ಸಮಾಜದ ಜನರು ಪ್ರಜ್ಞಾವಂತರಾಗಿದ್ದಾರೆ. ಇದನ್ನು ನಮ್ಮನ್ನು ಟೀಕಿಸುವ, ಅವಹೇಳನಕಾರಿ ಮಾತುಗಳನ್ನು ಆಡುವ ವಾಲ್ಮೀಕಿ...
ಇಮೇಜ್
 ಕಲಾ ನಮನ ಟ್ರಸ್ಟ್  ನಿಂದ 79ನೇ ಸ್ವಾತಂತ್ರೋತ್ಸವ ದಿನಾಚರಣೆಯ ಅಂತರ್ಜಾಲ ಕವಿಗೋಷ್ಠಿ ಯಾದಗಿರಿ: ಸ್ವಾತಂತ್ರೊö್ಯÃತ್ಸವ ಅಂಗವಾಗಿ ಇದೇ 15 ಆಗಸ್ಟ್ 2025, ಸಂಜೆ : 5 ಗಂಟೆಗೆ ಅಂತರ್ಜಾಲ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,  ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯನ್ನು ಖ್ಯಾತ ವೈದ್ಯರು ಹಾಗೂ ಕವಿಗಳಾದ ಕೊಂಕಲ್ ಮೂಲದ ಡಾ. ಎಸ್. ಎಸ್. ಗುಬ್ಬಿ,  ಸಾಮಾಜಿಕ ಚಿಂತಕ ಬಸವರಾಜ ಪಾಟೀಲ ಕೊದಂಡ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕೊಂಕಲ್ ಪ್ರಜ್ಞಾವಂತರ ಬಳಗದ ಅಧ್ಯಕ್ಷ ಪ್ರೊ. ವೆಂಕಣ್ಣ ಡೊಣ್ಣೆಗೌಡರ ವಹಿಸುವರು. ಕವಿತೆಯ ಕುರಿತು  ಸಾಹಿತಿಗಳಾದ ಡಾ. ಮರಿಯಪ್ಪ ನಾಟೇಕಾರರವರು ಮಾತನಾಡಲಿದ್ದಾರೆ. ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು: ಡಾ. ದಾವಲಸಾಬ ನರಗುಂದ, ಮಲ್ಲಮ್ಮ ಯಾಟಗಲ್,ಮೀನಾಕ್ಷಿ ಆರ್. ಹೊಸಮನಿ, ಡಾ. ಕೈಲಾಶ ಡೋಣಿ, ಷರೀಫ್ ಹಸಮಕಲ್, ಡಾ. ಎ. ಎಲ್.ದೇಸಾಯಿ, ಸಿದ್ದಣ್ಣ ಪೂಜಾರಿ, ಚನ್ನಪ್ಪ ಬಾಗಲಿ,ಆನಂದ ಎಸ್. ಗೊಬ್ಬಿ, ಪ್ರಿಯಾಂಕ ಮಾವಿನಕರ್, ದೇವೇಂದ್ರ ಹುಲಕಲ್(ಜೆ), ಶ್ರೀನಿವಾಸ ಮಡಿವಾಳ ಕೊಂಕಲ್, ಮಲ್ಲಿಕಾರ್ಜುನ ಕಾವಲಿ, ಬಿ. ಎನ್. ದೊಡ್ಡಮನಿ, ವೀರೇಶ ಕೊಂಕಲ್, ಈಶ್ವರ ನಾಟೇಕಾರ, ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆಯನ್ನು ಸ್ವರ ಸಂವಾದಿನಿ ಸಂಗೀತ ಶಾಲೆ ಧಾರವಾಡ ಮಕ್ಕಳಿಂದ ನೆರವೇರಿಸಲಿದ್ದಾರೆ ಎಂದು ಟ್ರಸ್ಟ್ ನ ಅಧ್ಯಕ್ಷರು ಡಾ. ಬಸವರಾಜ ಎಸ್. ಕಲೆಗಾರರವರು ಪತ್ರಿಕಾ ಪ್ರಕಟ...
 ಆ. 16ರಂದು ಕೃಷ್ಣ ಜನ್ಮಾಷ್ಟಮಿ ನಿಮಿತ್ತ ದಹಿ ಹಂಡಿ ಒಡೆಯುವ ಸ್ಪರ್ಧೆ ಆಯೋಜನೆ : ಶಶಾಂಕ ನಾಲ್ವಡಿಗಿ ಯಾದಗಿರಿ: ಗಿರಿನಗರ ಗೆಳೆಯರ ಬಳಗದ ವತಿಯಿಂದ ದಹಿ ಹಂಡಿ ಒಡೆಯುವ ಕಾರ್ಯಕ್ರಮ ಇಲ್ಲಿನ ಗಾಂದಿ ವೃತ್ತದಲ್ಲಿ ಆ. 16 ರಂದು ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಶಶಾಂತ ನಾಲ್ವಡಿಗಿ ಪ್ರಕಟಿಸಿದರು.  ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ಜರುಗುವ ಸಮಾರಂಭಕ್ಕೆ ಸ್ವಾಮೀಜಿಯವರು ಚಾಲನೆ ನೀಡುವರು, ಕಳೆದ ವರ್ಷ ಆಯೋಜಿಸಿದ್ದ ಕಾರ್ಯುಕ್ರಮ ಅಭೂತಪೂರ್ವ ಯಶಸ್ವಿಯಾಗಿದ್ದು ಇದರಿಂದ ಸ್ಪೂರ್ತಿಯಿಂದಾಗಿ ಈ ಬಾರಿ 2ನೇ ವರ್ಷದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಈಗಾಗಲೇ 6 ತಂಡಗಳು ಹೆಸರು ನೋಂದಾಯಿಸಿಕೊAಡಿವೆ. ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ 11ಸಾವಿರ ರೂ. ನಗದು ಬಹುಮಾನ ವಿತರಣೆ ಮಾಡಲಾಗುವುದು. ಉಳಿದ ಭಾಗಿಯಾದ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಪ್ರತಿಯೊಂದು ತಂಡಕ್ಕೂ ವಿಶೇಷ ಸಮಯಾವಕಾಶ ಒದಗಿಸಲಾಗುತ್ತದೆ.  ಮಹಿಳೆಯರಿಗೆ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.  ಇನ್ನೋರ್ವ ಮುಖಂಡ ದೊಡ್ಡಪ್ಪ ಚಂಡ್ರಕಿ ಮಾತನಾಡಿ ಗೆಳೆಯರ ಬಳಗದ ಸದಸ್ಯರಿಂದಲೇ ಖರ್ಚು ವೆಚ್ಚ ಭರಿಸಲಾಗುತ್ತಿದ್ದು, ಯಾವುದೆ ಹೊರಗಿನವರ ನೆರವು ಪಡೆಯದೇ ಆಯೋಜನೆ ಮಾಡುತ್ತಿದ್ದು, ಇದೊಂದು ಕೃಷ್ಣ ಜನ್ಮಾಷ್ಪಮಿ ನಿಮಿತ್ತ ಆಯೋಜಿಸಲಾಗಿರುವ ವಿನೂತನ ಯುವಕರ ಕಾರ್ಯಕ್ರಮವಾಗಿದೆ ...