ಪೋಸ್ಟ್‌ಗಳು

ಸೆಪ್ಟೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿಲ್ಲದ 13 ಕ್ಕೂ ಹೆಚ್ಚು ರೈಲುಗಳು ನಿಲುಗಡೆಗೆ ಕ್ರಮ ಕೈಗೊಳ್ಳಿ, ರೈಲ್ವೆ ಬೇಡಿಕೆಗಳು ಈಡೇರಿಸಿ: ಟಿಎನ್‌ಭೀ

ಯಾದಗಿರಿ: ಜಿಲ್ಲೆಯಾಗಿ 14 ವರ್ಷಗಳೇ ಕಳೆದರೂ ನಗರದಲ್ಲಿ ಸರಿಸುಮಾರು 13ಕ್ಕೂ ಹೆಚ್ಚು ರೈಲುಗಳ ನಿಲುಗಡೆ ಆಗದೇ ಇರುವುದು ದೊಡ್ಡ ಹಿನ್ನಡೆಯಾಗಿದೆ ಕೂಡಲೇ ಎಲ್ಲ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.  ಈ ಕುರಿತು ಹೇಳಿಕೆ ನೀಡಿರುವ ಕರವೇ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ, ಯಾದಗಿರಿ ಜಿಲ್ಲೆಯಾಗಿ ಸುದೀರ್ಘ ಅವಧಿ ಕಳೆದರೂ ಸಹ ರೈಲ್ವೆ ಇಲಾಖೆ ಇನ್ನು ಇತ್ತ ಗಮನ ಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ರೈಲ್ವೆ ನೂತನ ಸಚಿವ ವಿ. ಸೋಮಣ್ಣನವರು ಈ ಭಾಗದ ದೀರ್ಘ ಕಾಲದ ರೈಲ್ವೆ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದರು.  ಯಾದಗಿರಿ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್ಪ್ರೆಸ್(22691/22692), ಪದ್ಮಾವತಿ ಎಕ್ಸ್ಪ್ರೆಸ್ (12731/12732), ರಾಜಕೋಟ್ ಎಕ್ಸ್ಪ್ರೆಸ್ (16613/16641), ದ್ವಾರಕಾ ಎಕ್ಸ್ಪ್ರೆಸ್ (19567/19568), ವಾಸ್ಕೋ ಎಕ್ಸ್ಪ್ರೆಸ್ (17321/17322), ಏಕ್ತಾನಗರ ಎಕ್ಸ್ಪ್ರೆಸ್ (20919/20920), ಸಾಯಿನಗರ ಶಿರಡಿ (22601/22602, ಅಹ್ಮದಾಬಾದ್ ಎಕ್ಸ್ಪ್ರೆಸ್ (22689/22690) ಮಧುರೈ ಎಕ್ಸ್ಪ್ರೆಸ್ 22101/22102, ತಿರುಪತಿ ಹಮ್‌ಸಫರ್ ಎಕ್ಸಪ್ರೆಸ್ (22705/22706, ಗೋರಖಪುರ ಎಕ್ಸ್ಪ್ರೆಸ್ 22533/22534, ಅಹ್ಮದಾಬಾದ್ ಹಮ್ ಸಫರ್ ಎಕ್ಸ್ಪ್ರೆಸ್ (22191/22920, ಮತ್ತು ಗೋರಖಪುರ ಎಕ್ಸ್ಪ್ರೆಸ್ 12591/12592 ಸೇರಿ ಒಟ್ಟು 13 ರೈಲುಗಳು ವಾರದ ಹಾಗೂ ಕೆಲ...

ಸಾಬಣ್ಣ ಕುರಕುಂದಿ ಅವರಿಗೆ ಗೌಡಾ ಪದವಿ ಪ್ರದಾನ

ಇಮೇಜ್
ಯಾದಗಿರಿ: ಜಿಲ್ಲೆಯ ಯುವ ಮುಖಂಡ ಸಾಬಣ್ಣ ಕುರಕುಂದಿ ಇವರಿಗೆ ಸಾಮಾಜಿಕ ಸೇವೆ ಪರಿಗಣಿಸಿ ಏಶಿಯಾ ಇಂಟರನ್ಯಾಷನಲ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.  ಬೆಂಗಳೂರಿನಲ್ಲಿ ಜರುಗಿದ ವಿವಿ ಸಮಾರಂಭದಲ್ಲಿ ಸಾಬಣ್ಣ ಅವರು ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು. ವಿಶೆಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ “ಗೌಡಾ” ನೀಡಲಾಗಿದೆ ಎಂದು ವಿವಿ ಪದವಿ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಅಂತಾರಾಷ್ಟಿçÃಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಸಾತ್ವಿಕ ಆಕ್ರೋಶ

ಇಮೇಜ್
"ರಸ್ತೆ ದುರಸ್ತಿ ಮಾಡಿ; ಇಲ್ಲದಿದ್ದರೆ ನಾವೇ ನಾಗರಿಕರಿಂದ ಚಂದಾ ಎತ್ತಿ ದುರಸ್ತಿ ಮಾಡುತ್ತೇವೆ" ಯಾದಗಿರಿ: ಮಳೆಯಿಂದ ಜಿಲ್ಲಾದ್ಯಂತ ಹಾನಿಗೊಳಗಾಗಿರುವ ಪ್ರಮುಖ ರಸ್ತೆಗಳು ಸೇರಿದಂತೆ ವಿಶೇಷವಾಗಿ ನಗರದ ವಿವಿಧೆಡೆ ರಸ್ತೆಗಳು ಹಂಡೆಯAತಹ ಗುಂಡಿಗಳಾಗಿವೆ ಇದರಿಂದ ಜನ ಸುಗಮ ಸಂಚಾರ ನರಕಮಯವಾಗಿದ್ದು ತಕ್ಷಣ ಒಂದು ವಾರದಲ್ಲಿ ದುರಸ್ತಿ ಕೈಗೊಳ್ಳದೇ ಇದ್ದಲ್ಲಿ ಜನರಿಂದ ಚಂದಾ ಸಂಗ್ರಹಿಸಿ ನಾವೇ ರಸ್ತೆ ದುರಸ್ತಿ ಮಾಡಬೇಕಾಗುತ್ತದೆ ಎಂದು ಅಂತಾರಾಷ್ಟಿçÃಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಎಚ್ಚರಿಸಿದ್ದಾರೆ.  ಈ ಕುರಿತು ಹೇಳಿಕೆ ನೀಡಿರುವ ಅವರು, ಈ ಬಾರಿ ವಾಡಿಕೆಗಿಂತ ಮೊದಲೇ ಮಳೆಗಾಲ ಆರಂಭವಾಗಿದ್ದು, ಮೇ ತಿಂಗಳ ಕೊನೆಯಿಂದ ಮಳೆ ಬರುತ್ತಿದ್ದು, ಮೊದಲೇ ಕಳಪೆ ಕಾಮಗಾರಿಯಿಂದಾಗಿ ಹಾಳಾಗಿದ್ದ ರಸ್ತೆಗಳು ಸತತ ಮಳೆಗೆ ಇನ್ನಷ್ಟು ಹಂಡೆಯAತಹ ಗುಂಡಿಗಳು ಬಿದ್ದ ಪರಿಣಾಮ ಜನ ಸಂಚಾರ ನರಕ ಸಂಚಾರವಾಗಿ ಪರಿಣಮಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಗಂಜ್ ರಸ್ತೆ, ವಡಗೇರಿ ಕ್ರಾಸ್, ಭೀಮಾನದಿ ಮೇಲಿನ ಸೇತುವೆಯ ಮದ್ಯೆಯು ಗಡಿಗೆ ಗುಂಡಿಗಳು ಬಿದ್ದಿವೆ. ಬಸ್ ನಿಲ್ದಾಣ ರಸ್ತೆ, ಬಾಲಾಜಿ ದೇವಸ್ಥಾನ ರಸ್ತೆ ವಿಶೇಷವಾಗಿ ಶಾಸಕರ ಜನಸಂಪರ್ಕ ಕಚೇರಿ ಎದುರಿಗೆ ಸೇರಿದಂತೆ ಪ್ರತಿಯೊಂದು ರಸ್ತೆಗಳು ಗುಂಡಿಮಯವಾಗಿವೆ. ಇಷ್ಟೆಲ್ಲ ಅನಾಹುತ ಆಗಿದ್ದರೂ ಸಹ ಸಂಬAಧಪಟ್ಟ ಇಲಾಖೆ ಕೆಲಸ ಮಾಡದೇ ತೆಪ್ಪಗೆ ಕುಳಿತಿರುವುದು ನಾಗರಿಕ ಸಮಾಜ ಪ್ರಜ್ಞಾವಂತ ಸಮಾಜ...

ಸೆ. 5 ರಂದು 750 ಮಣ್ಣಿನ ಗಣೇಶ ಮೂರ್ತಿಗಳ ಉಚಿತ ವಿತರಣೆ: ಮಲ್ಲಿಕಾರ್ಜುನ ಶಿರಗೋಳ

ಇಮೇಜ್
ಯಾದಗಿರಿ: ದೇಶದಲ್ಲಿ ಸಾವಿರಾರು ವರ್ಷಗಳಿಂದ ಪರಂಪರಾಗತವಾಗಿ ನಡೆದುಕೊಂಡು ಬಂದ ಮಣ್ಣಿನ ಗಣೇಶನನ್ನು ಪೂಜಿಸುವ ಮಹತ್ವ, ಉದ್ದೇಶ ಹಾಗೂ ಹಿನ್ನೆಲೆಯನ್ನು ತಿಳಿಸುವ ಉದ್ದೇಶದಿಂದ ಪರಿಸರ ಸ್ನೇಹಿ ಗಣೇಶನ ಉಚಿತವಾಗಿ ವಿತರಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಶಿ ಸೂಪರ್ ಬಜಾರ್ ನ ಮಾಲೀಕರಾದ ಮಲ್ಲಿಕಾರ್ಜುಜ ಶಿರಗೋಳ ಪ್ರಕಟಿಸಿದರು.  ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪರಂಪರಾಗತವಾಗಿ ಮಣ್ಣಿನಿಂದ ಮಾಡಿದ ಗಣೇಶನನ್ನೂ ಪೂಜೆಸಿದರೆ ಫಲ ಪ್ರಾಪ್ತಿಯಾಗುತ್ತದೆ ಎಂಬ ಧರ್ಮ ನೀತಿ ಇದ್ದರೂ ಸಹ ಆಧುನಿಕತೆಯ ಸೋಗು ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ನಮ್ಮ ಹಬ್ಬ ಹರಿದಿನಗಳು ಸಂಪೂರ್ಣ ಧರ್ಮ ಮಾರ್ಗದರ್ಶನದಿಂದ ಹೊರತಾಗಿ ಹಾದಿ ತಪ್ಪಿರುವುದನ್ನು ಮನಗಂಡು ಮತ್ತೆ ಮಣ್ಣಿನ ಗಣೇಶನ ಪೂಜೆ ಮಾಡುವುದೇ ಶ್ರೇಷ್ಠ ಎಂಬುದನ್ನು ತಿಳಿಸುವ ಉದ್ದೇಶದಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ 4 ವರ್ಷಗಳಿಂದ ಮಣ್ಣಿನ ಗಣೇಶ ನ ಉಚಿತ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.  ಈ ಕಾರ್ಯವನ್ನು ಮೊದಲಿಗೆ ವಿಜಯ ವಿಠಲ ಸೇವಾ ಸಂಸ್ಥೆಯವರು ಆರಂಭಿಸಿದರು ಇವರೊಂದಿಗೆ ನಮ್ಮ ಶಶಿ ಚಾರಿಟೆಬಲ್ ಮತ್ತು ಶಿಕ್ಷಣ ಸಂಸ್ಥೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕ, ಪಾರ್ಲಿಮೆಂಟ್ ಗೆಳೆಯರ ಬಳಗ ಹಾಗೂ ಶ್ರೀ ಲಕ್ಷಿö್ಮÃ ದೇವಸ್ಥಾನ ಸಮಿತಿಯವರು ಜೊತೆಗೂಡಿ ಈ ಬಾರಿ ವಿಶೇಷವಾಗಿ ಮಣ್ಣಿನ ಗಣಪ...

ಯಾದಗಿರಿ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಮೌನೇಶ ಗಿರೆಪ್ಪನೋರ್ ಅವಿರೋಧ ಆಯ್ಕೆ

ಇಮೇಜ್
ಯಾದಗಿರಿ: ಜಿಲ್ಲಾ ಛಾಯಾಗ್ರಾಹಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಗರದ ಛಾಯಾಗ್ರಾಹಕ ಮೌನೇಶ ಗಿರೆಪ್ನೋರ್ ಅವಿರೋಧವಾಗಿ ಆಯ್ಕೆ ಯಾದರು. ನಗರದ ಜಿಲ್ಲಾ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಅವಿರೋಧವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಪದಾಧಿಕಾರಿಗಳಾಗಿ ಶೇಕ್ ಸರ್ದಾರ್ (ಉಪಾಧ್ಯಕ್ಷ), ಈಶ್ವರ ಬಲಕಲ್ (ಕಾರ್ಯದರ್ಶಿ), ಬಾಬು ಮೋಸಸ್ (ಸಹ ಕಾರ್ಯದರ್ಶಿ), ಅಜ್ಹರೋದಿನ್ (ಖಂಜಾಚಿ) ಆಯ್ಕೆಯಾದರು.  ಸಭೆಯಲ್ಲಿ ಸಂಘದ ಹಿರಿಯ ಮುಖಂಡರಾದ ಧರ್ಮಣ್ಣ ಗಿರೆಪ್ನೋರ್, ವಸಿಂ ಅಹಮದ್, ಗಿಡಿಯೋನ್ ಮೋಸೆಸ್, ಅಬ್ದುಲ್ ಅಲಿಂ, ನಂದಕುಮಾರ್, ಉಮಾರ್, ಏಜಾಜ್, ಮುಂತಾದ ಛಾಯಾಗ್ರಹಕರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.

ಜೆಸ್ಕಾಂ ಇಇ ಕಚೇರಿ ಮುಂದೆ ರೈತರಿಂದ ಭಾರಿ ಪ್ರತಿಭನೆ

ಇಮೇಜ್
ಸರ್ಕಾರ ರೈತರ ಪಂಪ್ ಸೇಟ್ ಗೆ ಆಧಾರ ಕಾರ್ಡ ಜೋಡಿಸಿ ರೈತರ ಬೆನ್ನಿಗೆ ಚೂರಿ ಹಾಕಲು ಹೊರಟಿದೆ: ಯಾದಗಿರಿ: ರೈತ ವಿರೋಧಿ ವಿದ್ಯುತ್ ನೀತಿಯನ್ನು ರದ್ದು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ದ ಜಿಲ್ಲಾ ಘಟಕ ವತಿಯಿಂದ ಇಲ್ಲಿನ ಜೆಸ್ಕಾಂ ಇಇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.  ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷ ಎಚ್.ಆರ್. ಬಡಿಗೇರ ಅವರ ನೇತೃತ್ವದಲ್ಲಿ ನೇತಾಜಿ ಸುಭಾಷ ಚಂದ್ರ ಬೋಸ್ ವೃತ್ತದಿಂದ ಮೆರವಣಿಗೆಯಲ್ಲಿ ಬಂದು ಇಇ ಕಚೇರಿ ಮುಂದೆ ಧರಣಿ ನಡೆಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯ÷್ಕಷ ಎಚ್.ಆರ್. ಬಡಿಗೇರ, ಕೃಷಿ ಪಂಪ್‌ಸೆಟ್‌ಗಳಿಗೆ ಆರ್.ಆರ್. ನಂಬರ್‌ಗೆ ಆಧಾರ ಕಾರ್ಡ ನಂಬರ ಜೋಡಣೆ ಮಾಡುವ ಮೂಲಕ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಉದ್ದೇಶದಿಂದ ರಾಜ್ಯದಲ್ಲಿ ಸರ್ಕಾರ ರೈತರ ಬೆನ್ನಿಗೆ ಚೂರಿ ಹಾಕುವ ನಿಟ್ಟಿನಲ್ಲಿ ತರಾತುರಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ದಿನಾಂಕ: 22-09-2023 ರಿಂದ ಟಿ.ಸಿ. ವಿದ್ಯುತ್ ಕಂಬಗಳು, ವೈರ್‌ಗಳು, ಇತರೆ ಸಾಮಾಗ್ರಿಗಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕೆಂದು ಕರಾಳ ಕಾನೂನು ಜಾರಿಗೊಳಿಸಿದೆ.  ಹಿಂದೆ ಕೃಷಿ ಪಂಪ್‌ಸೆಟ್‌ಗಳಿಗೆ 2000 ಇಸ್ವಿಯಲ್ಲಿ ವಿದ್ಯುತ್ ಶುಲ್ಕ ವಸೂಲಿ ಮಾಡುತ್ತಿದ್ದ ಆಗಿನ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣ ರವರ ಸರ್ಕಾರದ ನೀತಿಗಳ ವಿರುದ್ಧ 2001...

2 ದಿನಗಳ ಜಮಾತೆ ಅಹ್ಮದೀಯಾ ಸಂಘಟನೆಯ ‘ಲಜ್ನಾ ಇಮಾಹಿಯುಲ್ಲಾ’ ಜಿಲ್ಲಾ ಸಮ್ಮೇಳನ ಸಂಪನ್ನ

ಇಮೇಜ್
ಯಾದಗಿರಿ: ಜಮಾತೆ ಅಹ್ಮದೀಯಾ ಸಂಘಟನೆಯ ಲಜ್ನಾ ಇಮಾಹಿಯುಲ್ಲಾಹ್ (ಮಹಿಳಾ ಘಟಕ) ಮತ್ತು ನಾಸಿರಾತುಲ್ ಅಹ್ಮದೀಯಾ (ಕಿಶೋರಿಯರ ಸಂಘ) ದ ಎರಡು ದಿನಗಳ ಯಾದಗಿರಿ- ಕಲ್ಬುರ್ಗಿ ಜಿಲ್ಲಾ ಸಮ್ಮೇಳನ ಶಹಾಪೂರ ಪೇಟ್ ನ ರಾಯಲ್ ಫಂಕ್ಷನ್ ಹಾಲ್ ನಲ್ಲಿ ಜರುಗಿತು.  ಲಜ್ನಾ ಇಮಾಹಿಯುಲ್ಲಾಹ್ ಜಿಲ್ಲಾದ್ಯಕ್ಷೆ ಶ್ರೀಮತಿ ಮೆಹೆಮೂದಾ ನಯಿಮ್ ಸಗ್ರಿ ಮಾತನಾಡಿ, ನಮ್ಮ ಮಹಿಳಾ ಸಂಘಟನೆ (ಲಜ್ನಾ) ದ್ವಿತಿಯ ಖಲೀಫಾರಾದ ಹಜರತ್ ಮಿರ್ಜಾ ಬಷೀರುದ್ದೀನ್ ಮೆಹೆಮೂದ ಅವರ ಕಾಲದಲ್ಲಿ ಅಂದರೆ 1822 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ವಿಂಗ್ ನ ಉದ್ದೇಶವೇನೆಂದರೆ, ೆ ಮಹಿಳೆಯರು ಹೇಗೆ ಮಕ್ಕಳ ಪಾಲನೆ ಪೋಷಣೆ ಜವಬ್ದಾರಿ ಹಾಗೂ ಹೊಣೆಗಾರಿಕೆಯನ್ನು ತಿಳಿಸಿಕೊಡುವ ಕೆಲಸ ಮಾಡುತ್ತಾ ಬರುತ್ತಿದೆ. ಮಕ್ಕಳು ಬೆಳೆಸುವಾಗ ದೇವರ ಬಗ್ಗೆ ಭಯ ಭಕ್ತಿ ಕಲಿಸಿಕೊಡುವ ಕೆಲಸ ಮಾಡಬೇಕೆಂದು ತಿಳಿಸುತ್ತದೆ. ಮಕ್ಕಳು ಮಾನವೀಯತೆಯನ್ನು ಗುರ್ತಿಸುವ ರೀತಿಯಲ್ಲಿ ಅವರನ್ನು ಬೆಳೆಸಬೇಕು. ಮತ್ತು ಮಹಿಳೆಯರು ಟಿವಿ ಇಂಟರನೆಟ್ ನಲ್ಲಿನ ಕೆಟ್ಟ ಅಂಶಗಳಿAದ ದೂರವಿರಬೇಕೆಂದು ಸಲಹೆ ನೀಡಿದರು. ಖಂಡಿತವಾಗಿಯೂ ನೀವು ಮಾಡುವ ಉತ್ತಮ ಕಾರ್ಯಗಳೇ ನಿಮ್ಮ ಮಕ್ಕಳಿಗೆ ಒಳಿತನ್ನು ಮಾಡುತ್ತವೆ ಎಂಬುದು ತಿಳಿಯಬೇಕು ಎಂದು ಅವರು ಹೇಳಿದರು. ದೇವರ (ಅಲ್ಲಾನ) ಕಡೆ ಭಕ್ತಿ ಹಾಗೂ ವಿಶ್ವಾಸ ಹೊಂದಿದ್ದರೆ ಖಂಡಿತವಾಗಿ ನಿಮಗೆ ದೇವರ ಒಲುಮೆ ಹಾಗೂ ಕೃಪೆ ಆಗುತ್ತದೆ. ಉತ್ತಮ ಕಾರ್ಯ ಮಾಡಿದರೆ ಉತ್ತಮ ಗುಣವುಳ್ಳ ಸಂತಾನ ಸಿಗುತ್ತದೆ...

ಸಾರಿಗೆ ನೌಕರರ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ;ಅಧಿಸೂಚನೆ ಪ್ರಕಟ

ಇಮೇಜ್
ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೌಕರರ ಯಾದಗಿರಿ ವಿಭಾಗೀಯ ಪತ್ತಿನ ಸಹಕಾರ ಸಂಘ ನಿ, ಇದರ ನೂತನ 15 ಜನ ನಿರ್ದೇಶಕರ ಆಯ್ಕೆಗೆ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತು ಅಧಿಸೂಚನೆ ಹೊರಿಡಿಸಿರುವ ಚುನಾವಣಾಧಿಕಾರಿ ಆರ್. ಪವನಕುಮಾರ್ ಸಹಕಾರ ಸಂಘಕ್ಕೆ ಚುನಾವಣೆಗೆ ಪ್ರಕ್ರಿಯೆ ಆರಂಭಗೊAಡಿದ್ದು, ಕೆಎಸ್‌ಆರ್.ಟಿ.ಸಿ. ಯಾದಗಿರಿ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿರುವ ಕಚೇರಿಯಲ್ಲಿ ದಿ: 07-09-2024 ರಿಂದ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ದಿ: 13-09- 2024 ನಾಮಪತ್ರ ಸಲ್ಲಿಕೆಗೆ ಕೊನೆಯವಾಗಿದೆ. ದಿನಾಂಕ: 14-09-2024 ರಂದು ನಾಮಪತ್ರ ಪರಿಶೀಲನೆ ಮತ್ತು ದಿನಾಂಕ: 15-09-2024, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆಯನ್ನು ದಿನಾಂಕ: 17-09-2024 ಮಾಡಲಾಗುತ್ತದೆ ಕೊನೆಗೆ ದಿನಾಂಕ: 22-09-2024.ರಂದು ಅಗತ್ಯವಿದ್ದಲ್ಲಿ ಮತದಾನ ನಡೆಲಸಾಗುವುದು ಮತ್ತು ಅಂದೇ ಫಲಿತಾಂಶ ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ.