ಪೋಸ್ಟ್‌ಗಳು

ಡಿಸೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
 ಯಾದಗಿರಿಲಿ ನಾಳೆ ನಾಡಿದ್ದು, ಉಚಿತ ಸ್ಕೂಬಾ ಡೈವಿಂಗ್, ರಾಕ್ ಕ್ಲೆöÊಂಬಿAಗ್; ಕೀರ್ತಿ ಪಾಯಸ್ ಯಾದಗಿರಿಲಿ ಇಂದು ನಾಳೆ ಉಚಿತ ಸ್ಕೂಬಾ ಡೈವಿಂಗ್, ರಾಕ್ ಕ್ಲೆöÊಂಬಿAಗ್; ಕೀರ್ತಿ ಪಾಯಸ್ ಯಾದಗಿರಿ: ರಾಜ್ಯ ಯುವಜನೋತ್ಸವ 2025 ರ ಪ್ರಯುಕ್ತ ಜನರಲ್ ತಿಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ವತಿಯಿಂದ ಸ್ಕೂಬಾ ಡೈವಿಂಗ್ ಹಾಗೂ ರಾಕ್ ಕ್ಲೆöÊಂಬಿAಗ್ ಚಟುವಟಿಕೆಯನ್ನು ಎರಡು ದಿನಗಳ ಕಾಲ ಉಚಿತವಾಗಿ ಯಾದಗಿರಿ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ.  ನೋಂದಣಿ ಮಾಡಿದವರಿಗೆ ಮಾತ್ರ ಪ್ರವೇಶ, ಆನ್ ಲೈನ್ ನಲ್ಲಿ ಈ ಕೆಳಕಂಡ ಲಿಂಕ್ ಅನ್ನು ಬಳಿಸಿ ಈಗಲೇ ನೋಂದಾಯಿಸಿಕೊಳ್ಳುವAತೆ ಅಕಾಡೆಮಿಯ ಕೀರ್ತಿ ಪಾಯಸ್ ತಿಳಿಸಿದರು.  ಜಿಲ್ಲಾಧಿಕಾರಿಗಳ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ ಅವರು, ಉಚಿತ ಪ್ರವೇಶ. ಲಿಂಕ್: https://forms.gle/G1PvU2FbkoHVxNRz5 ಇದು ಬಳಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಸಿದರು.
 ಸಂಘ-ಸAಸ್ಥೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ – ಮಾತೋಶ್ರೀ ಜ್ಞಾನೇಶ್ವರಿದೇವಿ ಶಹಾಪುರ: ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ (ರಿ.) ವತಿಯಿಂದ ದ್ವಿತೀಯ ವಾರ್ಷಿಕೋತ್ಸವ, ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರು ಉದ್ಘಾಟಿಸಿ ಮಾತನಾಡುತ್ತಾ, ಅವರು ಸಂಸ್ಥೆಯು ಗ್ರಾಮೀಣ ಶಿಕ್ಷಣ, ಕಲೆ-ಸಂಸ್ಕೃತಿ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಕ್ಷೇತ್ರಗಳಲ್ಲಿ ಕೈಗೊಂಡಿರುವ ವಿವಿಧ ಸೇವಾ ಚಟುವಟಿಕೆಗಳನ್ನು ಪ್ರಸ್ತುತಪಡಿಸುತ್ತಿದೆ. ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. ಇಂತಹ ಸಂಘ-ಸAಸ್ಥೆಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ಅವರು ಹೇಳಿದರು. ಸಂಸ್ಥೆಯ ಈ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ, ಸಾಹಿತ್ಯ, ಕಲೆ, ಕ್ರೀಡೆ, ಸಾಮಾಜಿಕ ಸೇವೆ, ಕೃಷಿ ಮತ್ತು ಉದ್ಯಮ ಪ್ರತಿಷ್ಠಿತ ಸಾಧನೆ ತೋರಿದ ವ್ಯಕ್ತಿಗಳಿಗೆ ವಿಶೇಷ "ಸಿದ್ಧಸಿರಿ ಪ್ರಶಸ್ತಿ" ಗಳನ್ನು ಪ್ರಧಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಂಸ್ಥೆಯ ಪ್ರಯತ್ನಗಳನ್ನು ಶ್ಲಾಘಿಸಿದರು. ಅನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳು ನೃತ್ಯ, ಸಂಗೀತ, ಮೂಲ...