ರಕ್ತಹೀನತೆಯಿಂದ ಮಕ್ಕಳ ಬೆಳವಣಿಗೆ ಕುಂಠಿತ; ಪೌಷ್ಟಿಕ ಆಹಾರ, ಆಟೋಟಯುಕ್ತ ದಿನಚರಿ ಪರಿಹಾರ: ಡಾ|| ಸುರೇಶರೆಡ್ಡಿ
ಯಾದಗಿರಿ ಟೈಮ್ಸ್ ವಾರ್ತೆ
ಯಾದಗಿರಿ, 27.02.2024 : ಮಕ್ಕಳಲ್ಲಿ ಅನಿಮಿಯಾ (ರಕ್ತಹೀನತೆ) ಕೊರತೆ ಕಂಡುಬAದಲ್ಲಿ ಓದಿನಲ್ಲಿ ಹಿಂದುಳಿಯುತ್ತಾರೆ ಇದನ್ನು ಆರಂಭದ ಹಂತದಲ್ಲೇ ಪತ್ತೆಹಚ್ಚಿ ದೂರ ಮಾಡಿದಲ್ಲಿ ಮಕ್ಕಳ ಬೆಳವಣಿಗೆ ಸಕಾರಾತ್ಮಕವಾಗಿ ಆಗುತ್ತದೆ ಎಂದು ಮಕ್ಕಳ ತಜ್ಞ ಐಎಪಿ ಅದ್ಯಕ್ಷ ಡಾ. ಸುರೇಶ ರಡ್ಡಿ ಅಭಿಪ್ರಾಯಪಟ್ಟರು.
ನಗರದ ಭಾರತೀಯ ಚಿಕ್ಕಮಕ್ಕಳ ತಜ್ಞರ ಸಂಘದ ವತಿಯಿಂದ ನಗರದ ನವನಂದಿ ಶಾಲೆಯಲ್ಲಿ ಆಯೋಜಿಸಿದ್ದ ಅನಿಮಿಯಾ ಹಾಗೂ ಅಸ್ತಮಾ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಿಯಾದ ಹಾಗೂ ಪೌಷ್ಟಿಕಾಂಶ ಯುಕ್ತ ಊಟ ಮಾಡಬೇಕು ಅಲ್ಲದೇ ದೈಹಿಕ ಚಟುವಟಿಕೆಗಳಿಂದ ಕೂಡಿರುವ ದಿನಚರಿಯನ್ನು ಮಕ್ಕಳಿಗೆ ನಿಗದಿಪಡಿದರೆ ಸಮಸ್ಯೆ ಆಗುವುದಿಲ್ಲ, ಇದನ್ನು ಪಾಲಕರಿಗೆ ತಿಳಿವಳಿಕೆ ಕೊಡಬೇಕೆಂದು ಅವರು ಸಲಹೆ ನೀಡಿದರು.
ರಕ್ತಹೀನತೆ ನಿರ್ಲಕ್ಷö್ಯ ಮಾಡಿದರೆ ಅದು ಮುಂದೆ ಅಸ್ತಮಾಗೂ ಕಾರಣವಾಗಿ ಟಿಬಿ ಮುಂತಾದ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ರೋಗದ ಆರಂಭದಲ್ಲೇ ಅದಕ್ಕೆ ಪ್ರತಿಬಂಧಕ ಕ್ರಮಗಳು ಕೈಗೊಳ್ಳಬೇಕು ಇದಕ್ಕೆ ಅತ್ಯುತ್ತಮ ಪೌಷ್ಠಿಕ ಆಹಾರ ಹಾಗೂ ವಿಹಾರಗಳು ಅಗತ್ಯವಾಗಿವೆ ಎಂದು ಅವರು ನುಡಿದರು.
ಪ್ರಾಂಶುಪಾಲ ರೇವಣಸಿದ್ದಪ್ಪ ಮಲಕೂಡ ಪ್ರಾಸ್ತಾವಿಕ ಮಾತನಾಡಿ ರಕ್ತಹೀನತೆ ಇರುವ ಮಕ್ಕಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಆಟೋಟಗಳಲ್ಲಿಯೂ ಹಿಂದುಳಿಯುತ್ತಾರೆ. ಮಕ್ಕಳಲ್ಲಿ ಆಸಕ್ತಿ ಕಡಿಮೆಯಾದಲ್ಲಿ ಪಾಲಕರು ಹಾಗೂ ಶಿಕ್ಷಕರು ಗಮನ ಹರಿಸಿ ಮಕ್ಕಳ ಭೌತಿಕ ಬೆಳವಣಿಗೆಯತ್ತವೂ ಸಹ ಗಮನ ಹರಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾದ್ಯಕ್ಷ ಡಾ| ಚಂದ್ರಕಾAತ ಪೂಜಾರಿ ಆಗಮಿಸಿದ್ದರು. ವೇದಿಕೆ ಮೇಲೆ ಐಎಪಿ ಅಧ್ಯಕ್ಷ ಡಾ. ಪ್ರಶಾಂತ ಬಾಸೂತ್ಕರ್, ಐಎಪಿ ಖಜಾಂಚಿ ರಾಘವೇಂದ್ರ ರಡ್ಡಿ ಕೊಯಿಲೂರ ಹಾಗೂ ಶಾಲೆಯ ಮುಖ್ಯಗುರುಗಳು, ಅಧಿಕಾರಿ ಶಿಕ್ಷಕ ವರ್ಗದವರು ಇದ್ದರು.
ಬಸ್ಸುಗೌಡ ಶಿವರಾಯ ಯಲ್ಹೇರಿ ಅಧ್ಯಕ್ಷತೆ ವಹಿಸಿದ್ದರು. ಮೇಘಾ ಮಿಶ್ರಾ ಸ್ವಾಗತಿಸಿ ನಿರೂಪಿಸಿ, ವಂದಿಸಿದರು. 150ಕ್ಕು ಹೆಚ್ಚು ವಿದ್ಯಾರ್ಥಿಗಳ ತಪಾಸಣೆ ಮಾಡಲಾಯಿತು ಎಂದು ಐಎಪಿ ಪ್ರಕಟಣೆ ತಿಳಿಸಿದೆ.
.jpeg)
.jpeg)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ